Media Mind

ಬಾಗಿಲು ತೆರೆಯೇ ಮೀಡಿಯಾ ಅಮ್ಮ

‘ನ್ಯೂಸ್ ವೀಕ್’ ಸಂಪಾದಕರ ಬಿಚ್ಚುನುಡಿ

leave a comment »

ಡಿ ಪಿ ಸತೀಶ್

ಸುದ್ದಿ ಸಂಪಾದಕ, ಸಿ ಎನ್ ಎನ್ ಐ ಬಿ ಏನ್, ದೆಹಲಿ

ಫರೀಧ್ ಜಕಾರಿಯಾ ಪ್ರಪಂಚದ ಅತೀ ಪ್ರಭಾವಶಾಲಿ ಪತ್ರಕರ್ತರಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಸಾಪ್ತಾಹಿಕ ನ್ಯೂಸ್ ವೀಕ್ ನ ಸಂಪಾದಕ, ಜಕಾರಿಯಾ ನಮ್ಮವರು. ಮುಂಬಯಿಯಲ್ಲಿ ಹುಟ್ಟಿ ಬೆಳೆದವರು. ತಂದೆ ರಫೀಕ್ ಜಕಾರಿಯಾ ಹೆಸರಾಂತ ವಿದ್ವಾಂಸರು ಮತ್ತು ರಾಜಕಾರಣಿಯಾಗಿದ್ದವರು. ತಾಯಿ ಫಾತಿಮಾ ಜಕಾರಿಯಾ ಸಂಡೇ ಟೈಮ್ಸ್ ಆಫ್ ಇಂಡಿಯಾದ ಸಂಪಾದಕರಾಗಿದ್ದರು.

ಅಮೇರಿಕಾದ ಅತಿ ಪ್ರಭಾವಶಾಲಿ ಪತ್ರಕರ್ತರಾಗಿರುವ, ಫರೀಧ್ ನ್ಯೂಯಾರ್ಕ್ ವಾಸಿ. ನ್ಯೂಸ್ ವೀಕ್ ಸಂಪಾದಕತ್ವದ ಜೊತೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಅಂಕಣ, ಸಿ ಎನ್ ಎನ್ ಅಂತಾರಾಷ್ಟ್ರೀಯ ಚಾನೆಲ್ ನಲ್ಲಿ ಪರೀಧ್ ಜಕಾರಿಯಾ ಜಿಪಿಎಸ್ ಎನ್ನುವ ಅತ್ಯಂತ ಜನಪ್ರಿಯ ಕರೆಂಟ್ ಆಪೇರ್ಸ್ ಕಾರ್ಯಕ್ರಮ ಕೂಡಾ ನಡೆಸುವ ಪರೀಧ್ ನಿನ್ನೆ ನಮ್ಮ ಸಿ ಎನ್ ಎನ್ ಐ ಬಿ ಎನ್ ನ ನವದೆಹಲಿಗೆ ಕಚೇರಿಗೆ ಬಂದಿದ್ದರು.

ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರ ಅಮೇರಿಕಾ ಭೇಟಿಗೆ ಮೊದಲು ಅವರ ಸಂದರ್ಶನ ನಡೆಸಲು ಬಂದಿದ್ದ ಪರೀಧ್ ಜೊತೆ ಅನೌಪಚಾರಿಕವಾಗಿ ಮಾತನಾಡುವಾಗ, ವಿಷಯ ಪತ್ರಿಕೋದ್ಯಮದ ಭವಿಷ್ಯದತ್ತ ತಿರುಗಿತು.

ಹೇಳಿಕೇಳಿ ಜಗತ್ತಿನ ಪತ್ರಿಕೋದ್ಯಮ, ಟೀವಿಗಳ ವಿಷಯ ಫರೀದ್ ಗಿಂತ ಚೆನ್ನಾಗಿ ಗೊತ್ತಿರುವ ವ್ಯಕ್ತಿ ಮತ್ತೊಬ್ಬರಿಲ್ಲ.

‘ ಪತ್ರಿಕೆಗಳ ಭವಿಷ್ಯವೇನು. ಟೀವಿ ಚಾನೆಲ್ ಗಳ ಭವಿಷ್ಯ ಏನಾಗಬಹುದು. ನ್ಯೂಸ್ ವೀಕ್ ನಂತಹ ಸುದ್ದಿ ಸಾಪ್ತಾಹಿಕಗಳ ಮುಂದಿನ ದಾರಿಯೇನು ಎಂದು ಹೇಳುವುದು ತೀರಾ ಕಷ್ಟ. ಸುಮಾರು ನೂರು ವರ್ಷಗಳ ಕಾಲ ಪಾಲಿಸಿಕೊಂಡು ಬಂದಿದ್ದ ಪತ್ರಿಕೋದ್ಯಮದ ವ್ಯವಹಾರ ಮಾದರಿ ಕಳೆದ ಹತ್ತುವರ್ಷಗಳಲ್ಲಿ ತಲೆಕೆಳಗಾಗಿದೆ. ಹಳೆಯ ಮಾದರಿ, ಜ್ಞಾನ ಮುಂತಾದವೂ ಯಾವ ಉಪಯೋಗಕ್ಕೂ ಬಾರದಾಗಿವೆ. ಆದರೆ ಮುಂದೆ ಯಾವ ಮಾದರಿ ಅನುಸರಿಸಬೇಕೆಂದು ಯಾರಿಗೂ ಗೊತ್ತಿಲ್ಲ.

ಓದುಗರ ಮತ್ತು ಟೀವಿ ವೀಕ್ಷಕರ ಸಂಖ್ಯೆ ಕನಿಷ್ಟ ಹತ್ತುಪಟ್ಟು ಜಾಸ್ತಿಯಾಗಿದೆ. ಆದರೆ ಪತ್ರಿಕೆಗಳ ಆದಾಯ ಕುಸಿಯುತ್ತಿದೆ. ಪತ್ರಿಕೋದ್ಯಮವನ್ನು ಲಾಭದಾಯಕವಾಗಿ ನಡೆಸುವುದು ಹೇಗೆಂದು ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ಆರ್ಥಿಕ ಉದಾರೀಕರಣವನ್ನು ಹೇಗೆ ಎದುರಿಸಬೇಕೆಂದು ಪ್ರಪಂಚದ ಯಾವ ಪತ್ರಿಕೋದ್ಯಮಿಗೂ ತೋಚುತ್ತಿಲ್ಲ ‘, ಎಂದು ಜಕಾರಿಯಾ ಮಾತಿಗಳಿದರು.

ನ್ಯೂಸ್ ವೀಕ್ ನ ನೇರ ಪೈಪೋಟಿ ಇರುವುದು ಟೈಮ್ ಮ್ಯಾಗಜೀನ್ ಜೊತೆಗೆ. ಪ್ರಪಂಚದಾದ್ಯಂತ ಸುಮಾರು 5 ಕೋಟಿ ಜನ ಓದುವ ಟೈಮ್ ನಂತರದ ಸ್ಥಾನ ಸುಮಾರು 3 ಕೋಟಿ ಜನ ಓದುವ ನ್ಯೂಸ್ ವೀಕ್ ನದು.

ಈ ಎರಡೂ ಮ್ಯಾಗಜೀನ್ ಗಳ ಪೈಪೋಟಿ ಮುಗಿಲು ಮುಟ್ಟಿದೆ. ಕೊನೆಯದಾಗಿ ಕೇವಲ ಒಂದೇ ಒಂದು ಮ್ಯಾಗಜೀನ್ ಇರಲು ಸಾಧ್ಯ ಎನ್ನುವ ರೀತಿ ಈ ಹೋರಾಟ ನಡೆಯುತ್ತಿದೆ.

‘ ಮುಂದೇನಾಗುತ್ತೋ ಗೊತ್ತಿಲ್ಲ. ನಾವಿಬ್ಬರೂ ನಮ್ಮ ವಿನ್ಯಾಸ, ಶೈಲಿ, ಸುದ್ದಿಯ ರೀತಿ ಬದಲಿಸಿದ್ದೇವೆ. ಟೈಮ್ ತುಂಬಾ ಹಳೆಯದು. ನ್ಯೂಸ್ ವೀಕ್ ಹೊಸದು. ಸೆನ್ಸೇಶನಲ್ ಸುದ್ದಿ, ಬೆತ್ತಲೆ, ಅರೆ ಬೆತ್ತಲೆ ಪೋಟೋಗಳಿಂದ ಯಾವ ಪತ್ರಿಕೆಯ ಪ್ರಸಾರವೂ ಏರಿಲ್ಲ. ನನಗೆ ತಿಳಿದಿರುವಂತೆ ಆರೋಗ್ಯ ಸಂಬಂಧಿ ವಿಷಯ ಬರೆದಾಗ ಮಾತ್ರ ನ್ಯೂಸ್ ವೀಕ್ ಪ್ರಸಾರ ಏರಿದೆ. ಈ ವಾರದ ಪತ್ರಿಕೆಯಲ್ಲಿ ಸಾರಾ ಪೇಲಿನ್ ನ ಆಕರ್ಷಕ ಪೋಟೋ ಹಾಕಿದ್ದೇವೆ. ಇದರಿಂದ ಬಿಸಿ ಬಿಸಿ ಚರ್ಚೆ ನಡೆಯಬಹುದು. ಆದರೆ ಪ್ರಸಾರ ಏರುವ ಯಾವ ಲಕ್ಷಣವೂ ಇಲ್ಲ ‘ ಎಂದು ಜಕಾರಿಯಾ ನಕ್ಕರು.

ಅವರ ಪ್ರಕಾರ ಭಾರತದಲ್ಲಿ ಟೀವಿ ತೀರಾ ಹೊಸದಾಗಿರುವುದರಿಂದ ಇನ್ನೂ ಕೆಲವು ವರ್ಷ ಬೆಳೆಯುತ್ತದೆ. ಇಂಗ್ಲೀಷ್ ಜೊತೆಗೆ ಪ್ರಾದೇಶಿಕ ಪತ್ರಿಕೆಗಳೂ ಬೆಳೆಯುತ್ತವೆ. ಭಾರತದಲ್ಲಿ ಹೊರಬರುವಷ್ಟು ಪತ್ರಿಕೆಗಳು, ಟೀವಿಗಳು ಬೇರೆಲ್ಲೂ ಬರಲ್ಲ. ನಾನು ಪ್ರತಿ ಸಲ ಬಂದಾಗಲೂ ನಮ್ಮ ದೇಶದಲ್ಲಿ ಹೊಸದಾದ ಯಾವುದಾದರೂ ಇರುತ್ತೆ, ಎಂದು ಜಕಾರಿಯಾ ನಕ್ಕರು.

ಅಮೇರಿಕಾದ ಅಧ್ಯಕ್ಷರಿಂದ ಹಿಡಿದು, ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ, ಚೀನಾ, ರಷ್ಯಾ, ಬ್ರಿಟನ್, ಫ್ರಾನ್ಸ್ ಗಳಂತಹ ಬಲಾಢ್ಯ ಅಧ್ಯಕ್ಷರ ತನಕ ಎಲ್ಲರ ವೈಯಕ್ತಿಕ ಪರಿಚಯ, ಪ್ರಭಾವ ಇರುವ ಫರೀದ್ ಜಕಾರಿಯಾ ನಡೆ, ನುಡಿಯಲ್ಲಿ ಇನ್ನೂ ಭಾರತೀಯತೆ ಮರೆತಿಲ್ಲ. ಸದಾ ನಗುಮುಖದ, ಪ್ರೀತಿ ತುಂಬಿದ ಕಣ್ಣುಗಳ ಜಕಾರಿಯಾರಂತಹಾ ಪರ್ತಕರ್ತರು ಭಾರತದ ಹೆಮ್ಮೆ. ಜಗತ್ತಿಗೆ ಭಾರತದ ಕೊಡುಗೆ. ಹೇಳುವುದು ಮರೆತೆ, ಅವರ ವಯಸ್ಸು ಇನ್ನೂ ಕೇವಲ 45!

Written by Media Mind

November 21, 2009 at 8:40 pm

S R Ramakrishna on Bangalore’s perverse face

leave a comment »

MiD DAY reported yesterday how more pedestrians are killed in Bangalore than in any other Indian city.

And last night, I was among scores of pedestrians trying unsuccessfully to cross over from Koshy’s to the other side of St Mark’s Road. Escaping getting knocked down isn’t easy. It happens all the time, and not just in ‘commercial’ areas.

How did this city, once considered a pensioners’ (and by extension pedestrians’) paradise, turn into a gruesome pedestrian killing zone? And why are our footpaths disappearing?
There’s money in widening roads, that’s why. Who profits? The contractor who widens the road. The corporators and ministers and other VIPs the contractor pays off. And the vehicle user, who was pushed into buying her vehicle possibly because she was too scared to walk.

It doesn’t take an expert to tell us this city’s policy makers are boorish, insensitive, and anti-pedestrian. But citizens are still grateful to Traffic Engineers and Safety Trainers, a voluntary forum, for collecting statistics to show that 42 of 100 victims of fatal road accidents in Bangalore are pedestrians.

The corresponding figures are 31 for Delhi and 24 for Mumbai. Kolkata, it seems, is the safest city for pedestrians, with just 11 of 100 road accident victims being pedestrians.

Many romanticise Bangalore, but it is a perverse city in many ways.

Here’s why. Some years ago, when they built bus shelters in Bangalore, they made sure they had no benches. And then they also made sure no one sat on the bus stand wall by tapering its top into a sharp, upturned V. Only a sadist genius could have thought up such an idea.

Read the rest of this entry »

Written by Media Mind

November 19, 2009 at 11:11 pm

ಇದು ಉದಯ ಟಿವಿ ಯಾ?

with one comment

-ರವಿಕಾಂತ ಗೋರೆ

ಹಳ್ಳಿಯ ಜನರ ಮುಗ್ದ ಮಾತು ಕೇಳೋದು ಅಂದ್ರೆ ಏನೋ ಖುಷಿ…. ಎಷ್ಟೋ ಬಾರಿ ಇಂಥ ಘಟನೆಗಳು ನನ್ನೂರಿನಲ್ಲೂ ನಡೆಯುತ್ತಿದ್ದವು… ಅದರಲ್ಲಿ ಒಂದು ಘಟನೆ ಹೇಳುತ್ತೇನೆ… ಇದು ನಡೆದದ್ದು ಸುಮಾರು ೧೦ – ೧೨ ವರ್ಷಗಳ ಹಿಂದೆ… ಆಗ ನಮ್ಮ ಹಳ್ಳಿಗೆ ಕರೆಂಟ್ , ಫೋನ್ ಯಾವುದೂ ಬಂದಿರಲಿಲ್ಲ… ಕಾಡಿನ ಮಧ್ಯದಲ್ಲಿ ಸೀಮೆಯೆಣ್ಣೆದೀಪದ್ದೆ ಬೆಳಕು… ೫-೧೦ ಪೈಸೆ ಪೋಸ್ಟ್ ಕಾರ್ಡ್ ಅಥವಾ ಇನ್ಲ್ಯಾಂಡ್ ಲೆಟರ್ ಗಳು ಬಳಕೆಯಲ್ಲಿದ್ದವು… ನಮ್ಮೂರಿನಲ್ಲಿಮೊದಲು ಕರೆಂಟ್ ಲೈಟ್ ಉರಿದದ್ದು ಬಹುಶ ನಮ್ಮನೆಯಲ್ಲೇ… ೧೯೯೬-೧೯೯೭ ಈ ಕಾಲದಲ್ಲಿ ನಮ್ಮನೆಗೆ ಸೋಲಾರ್ ಬಂತು… ಆಗ ನಾವು ಖುಷಿ ಪಟ್ಟದ್ದು ಸೋಲ್ಪವಲ್ಲ… ಇರಲಿ, ಈಗ ವಿಷಯಕ್ಕೆ ಬರುತ್ತೇನೆ…

ಅದೊಂದು ದಿನ ನಮ್ಮ ಮನೆಗೂ ಟಿವಿ ಹಾಕ್ಬೇಕು ಅಂತ ನಿರ್ಧಾರಕ್ಕೆ ಬಂದೆವು… ಒಂದು ಚಿಕ್ಕ ಕಪ್ಪು-ಬಿಳಿ ಒನಿಡಟಿವಿ ತಗೊಂಡಿದ್ದು ಆಯಿತು…(ಅದು ಬಹುಶ ೧೯೯೮ ಅಥವಾ 1೯೯೯ ನೆ ಇಸವಿ ಇರ್ಬೇಕು ಸರಿಯಾಗಿ ನೆನಪಿಲ್ಲ) … ನಾನು ನಮ್ಮಣ್ಣ ಆ ಚಿಕ್ಕ ಟಿವಿ ಯನ್ನು ಹೊತ್ತುಕೊಂಡು ನಮ್ಮ ಮನೆಯ ೩ ಕಿಲೋಮೀಟರು ಹಾದಿಯನ್ನು ನಡೆಯುತ್ತಾ ಸಾಗಿದ್ದೆವು… ಅಷ್ಟರಲ್ಲೇ ಆ ಹೆಂಗಸು ನಮ್ಮನ್ನು ನೋಡಿಬಿಟ್ಟಿದ್ದಳು… ಅವಳ ಮನೆಯಿಂದ ಹೊರಗೆ ಬಂದವಳೇ ನಮ್ಮನ್ನ ಕೇಳಿದ್ಲು “ ಬಟ್ರೆ ಟಿವಿ ಯಾ ” ಅದಕ್ಕೆ ನಾನು ಹೌದು ಅಂತ ಹೇಳ್ದೆ… ಮತ್ತೆ ಅವಳಿಂದ ಇನ್ನೊಂದು ಪ್ರಶ್ನೆ ತೂರಿ ಬಂತು.. “ವೋವು ಟಿವಿ ಬಟ್ರೆ? ಉದಯ ಟಿವಿ ನಾ?” (ಯಾವ ಟಿವಿ ಬಟ್ರೆ? ಉದಯ ಟಿವಿ ನಾ) … ಬಹುಶ ಆಕೆ ಎಲ್ಲೊ ಉದಯ ಚಾನೆಲ್ ಬಗ್ಗೆಕೆಳಿರ್ಬೇಕು ಅದಿಕ್ಕೆ ಇಂಥ ಪ್ರಶ್ನೆ ಕೇಳಿದ್ದಾಳೆ … ನನಗೆ ಒಂದು ಕ್ಷಣ ಏನೆಂದೇ ಅರ್ಥ ವಾಗಲಿಲ್ಲ …ಅಷ್ಟರಲ್ಲಿ ಅಣ್ಣ ” ಅಂದ್ ಉಂದು ಉದಯ ಟಿವಿ ” (ಹೌದು ಇದು ಉದಯ ಟಿವಿ) ಅಂತ ಹೇಳಿ ಮುಂದೆ ಸಾಗಿದ್ದ… ನಾನೂ ನಗುತ್ತಾ ಅಲ್ಲಿಂದ ಹೆಜ್ಜೆ ಹಾಕಿದೆ..

Written by Media Mind

November 19, 2009 at 10:39 pm

Posted in Uncategorized

Ayyo..

with one comment

By S R Ramakrishna, Editor, Mid-Day

* Tibet is a part of China, says Obama.
:) So what? Debate is a part of India.

* Indian administration ranks low on honesty index.
:) Okay, how much does it take to have the rank improved?

* After huge row, Jagadeesh Shettar debuts as minister.
:) Ah, finally, Shutter becomes Opener.

Written by Media Mind

November 18, 2009 at 4:54 am

Posted in S R Ramakrishna

Tagged with , , ,

‘ನಿಮ್ಮ ಎಕ್ಸ್ ಪ್ರೆಸ್ ಗಿಂತ ಟೈಮ್ಸ್ ಅವ್ರ circulation ಜಾಸ್ತಿ’

with 5 comments

-ಅಶ್ವಿನಿ ಎಂ ಶ್ರೀಪಾದ್

ನನ್ನ ಹಳೆಯ ಸಹೋದ್ಯೋಗಿ ಒಬ್ಬರು ಒಮ್ಮೆ ಹೀಗೆ ಹೇಳಿದರು. “ಪ್ರತಿಯೊಬ್ಬರಿಗೂ ಹೇಗೆ ಅಮೆರಿಕಾಗೆ ಹೋಗಿ ನೋಡಬೇಕು ಅಂತ ಇರತ್ತೋ, ಹಾಗೆ ಪ್ರತಿಯೊಬ್ಬ ಪತ್ರಕರ್ತರಿಗೆ ಟೈಮ್ಸ್ ಆಫ್ ಇಂಡಿಯ ಇಲ್ಲಿ ಕೆಲಸ ಮಾಡಬೇಕು ಅಂತ ಇಚ್ಚೆ ಇರಬೇಕು”. ನಂಗೆ ಸದ್ಯಕ್ಕೆ ಅಮೇರಿಕಾ ಅಥವಾ ಟೈಮ್ಸ್ ಎರಡಕ್ಕೂ ಹೋಗುವುದಿಲ್ಲ. ಆದರೆ ಕಾಲನ ನಿರ್ಧಾರ ನಂಗೆ ಗೊತ್ತಿಲ್ಲ.

ನನ್ನ ಹೆಸರಿನ ನನ್ನ ಮಿತ್ರೆ ಆಗ ತಾನೆ ಡೆಕ್ಕನ್ ಹೆರಾಲ್ಡ್ ಇಂದ ಟೈಮ್ಸ್ ಆಫ್ ಇಂಡಿಯಾ ಸೇರಿದಳು. ಅವಳ ಮೊದಲ ಬೈಲೈನ್ನ್ ಟೈಮ್ಸ್ ನಲ್ಲಿ ಬಂದಿದ್ದೆ ತಡ, ಅಂದು ಬೆಳಿಗ್ಗೆ ನನ್ನ ಮೊಬೈಲ್ಗೆ ಕಾಲೋ ಕಾಲು. ಎಂದು ಮಾಡದೆ ಇರುವವರು, ಏನೇ ಟೈಮ್ಸ್ ಗೆ ಸೇರಿದ್ಯ, ನಂಗೆ ಹೇಳಲೇ ಇಲ್ಲ. congrats. treat ಯಾವಾಗ? ಹೀಗೆ ಪ್ರಶ್ನೆಗಳ ಸುರಿಮಳೆ. ನಾನು ಅವಳಲ್ಲ ಅಂತ ಹೇಳುವಷ್ಟರಲ್ಲೇ ಸಾಕಾಯಿತು.

ಆಗಿನ್ನೂ ನಾನು `transport beat’ cover ಮಾಡ್ತಿದೆ. ಕೆಲಸದ ಮದ್ಯೆ ಕ್ಯಾಂಟೀನ್ಗೆ (ಅಥವಾ ಕ್ಯಾಂಟೀನ್ ಮದ್ಯೆ ಕೆಲ್ಸಕ್ಕೆ ಬರುವೆ ಎಂದರು ತಪ್ಪಾಗಲಾರದು) ಹೋಗ್ತಾ ಇದ್ದೆ. ನಮ್ಮ ಆಗಿನ ಸಂಪಾದಕರು ನನ್ನ ನೋಡಿ, ಕೆಲಸ ಆಯ್ತಾ ಅಂದ್ರು. ಇಲ್ಲ ಎಂದೆ. ಇವತ್ತಿನ ಟೈಮ್ಸ್ ಓದಿದ್ಯ ಅಂದ್ರು. ಇಲ್ಲ ಅಂದೇ. ಸರಿ ತೊಗೊಳ್ಳಿ, ಬೈಯ್ಯಕ್ಕೆ ಶುರು ಮಾಡಿದರು. ಪತ್ರಿಕೆ ಓದದೆ ಯಾಕೆ ಕಚೇರಿಗೆ ಬರ್ತಿರ, ಹಂಗೆ-ಹಿಂಗೆ ಅಂತೆಲ್ಲ ಅಂದ್ರು. ಕಾರಣ ಕೇಳಿದೆ, ಅದಕ್ಕೆ ಅವ್ರು, “ಟೈಮ್ಸ್ ನಲ್ಲಿ KSRTC ಅವ್ರು ಚಲಿಸುವ ವಾಹನದಲ್ಲಿ conference hall ಬಗ್ಗೆ ಲೇಖನ ಮಾಡಿದ್ದಾರೆ. ನೀನು ಯಾಕೆ ಮಿಸ್ ಮಾಡಿದೆ” ಅಂದ್ರು. ನಾನು ಆ ಲೇಖನ ಬರೆದು ಮೂರೂ ವಾರ ಆಗಿತ್ತು. “ಸರ್, ನೀವು ಮೂರೂ ವಾರದ ಹಿಂದಿನ ಎಕ್ಸ್ಪ್ರೆಸ್ ಓದಿಲ್ಲ ಅಂತ ಅನ್ಕೊಂಡಿದ್ದೇನೆ. ನಾನು ಆಗಲೇ ಬರೆದು ಆಯಿತು” ಅಂದೇ. ಸುಮ್ಮನಾದರು.

ಮೊನ್ನೆ ಪಾಲಿಕೆ ಶಾಲೆಗಳ ಬಗ್ಗೆ ಲೇಖನ ಬರೆದಿದ್ದೆ. ನಂಗೆ information ಕೊಟ್ಟ ಪಾಲಿಕೆ ಶಿಕ್ಷಕರು, ನನ್ನ ಮೊಬೈಲ್ ಫೋನ್ ಮಾಡಿ. “ಮೇಡಂ ಲೇಖನ ಬರತ್ತೆ ಅಂದ್ರಲ್ಲ, ಬಂದೆ ಇಲ್ಲ. ಯಾವ ಪುಟ. ಎಲ್ಲ ಕಡೆ ಹುಡುಕಿದೆ,” ಅಂತ ಕೇಳಿದರು. ನಾನು ಪುಟ 2 ಅಂದೇ. ಇಲ್ಲ ಅಂತಲ್ಲೆ ವಾದ ಮಾಡಿದರು. ಕೊನೆಗೆ ಗೊತ್ತಾಗಿದ್ದು ಏನೆಂದರೆ ಅವ್ರು ಟೈಮ್ ಪತ್ರಿಕೆ ನೋಡಿದ್ದು ಅಂತ. ಕೋಪ ಬಂದಿತ್ತು, ಸುಮ್ಮನಾದೆ.

ಸ್ವಾತಂತ್ರ ದಿನಾಚರಣೆಗೆ ಮುನ್ನ ಸಾಮಾನ್ಯವಾಗಿ ರಾಜಭವನದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರಿಗೆ ಚಹಾ ಕೂಟ ಏರ್ಪಡಿಸುವುದು ವಾಡಿಕೆ. ಅಂದು ಅದನ್ನು ಕವರ್ ಮಾಡಲು ನಾನು ಹೋಗಿದ್ದೆ. ರಾಜ್ಯಪಾಲರ ಭಾಷಣ ನಿರಸವಾಗಿತ್ತು. ಸರಿ, ಅಲ್ಲಿದ್ದ ಹಿರಿಯ ಸ್ವತಂತ್ರ ಹೋರಾಟಗಾರರನ್ನು ಮಾತನಾಡಿಸೋಣ, ಅವ್ರ ಅನುಭವ makes an interesting piece ಅಂತ ಕೆಲವರನ್ನು ಮಾತನಾಡಿಸಿದೆ. ಒಂದು ಅಜ್ಜ, ಎಲ್ಲ ಹೇಳಿದ ಮೇಲೆ ಇದು ನಾಳೆ ಬರುತ್ತಾ ಅಂದರು. ಅದಕ್ಕೆ ಹೌದು ಎಕ್ಸ್ಪ್ರೆಸ್ ನೋಡಿ ಅಂದೇ. “ಅಯ್ಯೋ, ನಮ್ಮನೇಲಿ ಟೈಮ್ಸ್ ತರಿಸ್ತಾರೆ,” ಅಂದರು. ನಾನೇನು ಮಾಡಕ್ಕೆ ಆಗತ್ತೆ?

ಇನ್ನೊಮ್ಮೆ ಮನೆಗೆ ಆಟೋ ಹಿಡಿದು ಹೋಗ್ತಾ ಇದ್ದೆ. ರೇಸ್ ಕೋರ್ಸ್ ರೋಡ್ ಬರುವಷ್ಟರಲ್ಲಿ ಮೀಟರ್ ಸರಿ ಇಲ್ಲ ಅಂತ ಗೊತ್ತಾಯ್ತ. ಸರಿ, ನನಗೋ ಆಟೋ ಡ್ರೈವರ್ ಜೊತೆ ಜಗಳ ಆಡದೇ ನಿದ್ದೆ ಬರಲ್ಲ. ಸರಿ ಇಲ್ಲ ಅಂತ, ಅವ್ನು ಸರಿ ಇದೆ ಅಂತ ವಾದ ಮಾಡಿ, ಕೊನೆಗೆ ಅವ್ನೆ ಸೋಲು ಒಪ್ಪಿಕೊಂಡ. ಆಮೇಲೆ ಅವ್ನು ಮಾತನಾಡಲು ಶುರು ಮಾಡಿದ. ಮೇಡಂ, ಕಾಫಿ ಬೋರ್ಡ್ ಇಲ್ಲಿ ಕೆಲಸ ಮಾಡ್ತಿರ ಅಂದ, ನಾನು ಎಕ್ಸ್ಪ್ರೆಸ್ನಲ್ಲಿ ಅಂದೇ. “ಮೇಡಂ, ನಿಮ್ಮ ಎಕ್ಸ್ಪ್ರೆಸ್ ಗ್ಗಿಂತ ಟೈಮ್ಸ್ ಅವ್ರ circulation ಜಾಸ್ತಿ’ ಅಂದ. ಇವನಿಗೇನು ಕಷ್ಟ ಅನ್ಕೊಂಡೆ. “ಏಕಪ್ಪ, circulation ಕಡಿಮೆ ಅಂತ ದುಡ್ಡು ಕಡಿಮೆ ಇಸ್ಕೊತ್ಯ ? ಅಂದೇ” ಸುಮ್ಮನಾದ.

ನಮ್ಮ ಜನ ಯಾಕೆ ಹಿಂಗೆ? ಸಂಖ್ಯೆ ಆಧಾರದ ಮೇಲೆ ಗುಣ ಅಳಿಯುವುದು ಎಷ್ಟು ಸರಿ? ಏನಾದರಾಗಲಿ, ನಂಗೆ Express identity ಕೊಟ್ಟಿದೆ. ಅದಕ್ಕೆ ಅಭಾರಿಯಾಗಿದ್ದೇನೆ. ಈ ಪತಿಕೆಗೆ ಅದರದೇ ಆದ ಛಾಪು ಇದೆ ಹಾಗು ನಂಗೆ ಅದರ ಬಗ್ಗೆ ಹೆಮ್ಮೆ ಇದೆ. ಕೂಪ ಮಂಡುಕ ಅಂದರು ಸರಿಯೇ, ತೊಂದರೆ ಇಲ್ಲ.

Written by Media Mind

November 17, 2009 at 6:10 am